Vishwakarma Community in association with devotees of Goddess Kaalikamba and Veerabrahmendra Swamy had formed a committee in the year 1986, had received an approval from the government to construct the temple. A convention hall has also been built with an aim to help people.
1986ರಲ್ಲಿ, ತುಮಕೂರು ನಗರದ ವಿಶ್ವಕರ್ಮ ಜನಾಂಗದವರು, ಮತ್ತು ಇತರ ಭಕ್ತಾದಿಗಳು ಸೇರಿ ವಿಶ್ವಕರ್ಮ ಕಾಳಿಕಾಂಬ ವೀರಬ್ರಹ್ಮೇಂದ್ರ ಸ್ವಾಮಿ ದೇವಸ್ಥಾನ ಸಮಿತಿಯನ್ನು ರಚಿಸಿಕೊಂಡು, ಕರ್ನಾಟಕ ಸರ್ಕಾರದ ನೋಂದಣಿಯನ್ನು ಪಡೆದು ದೇವಾಲಯವನ್ನು ನಿರ್ಮಿಸಿದರು. ಶ್ರೀಯುತ ಹೆಚ್.ಆರ್. ನಾಗರಾಜಾಚಾರ್ ಎಂಬ ಮಹನೀಯರು ಈ ದೇವಾಲಯದ ವಿಶೇಷ ದಾನಿಗಳು. ದೇವಾಲಯದ ನಿರ್ಮಾಣದ ಜೊತೆಯಲ್ಲೇ ಎಲ್ಲಾ ಜನರಿಗೂ ಅನುಕೂಲ ಒದಗಿಸುವ ಉದ್ದೇಶದಿಂದ ಸಮುದಾಯ ಭವನವನ್ನು ಸಹ ನಿರ್ಮಿಸಿ ಸಮಾಜಸೇವೆಯನ್ನು ನಡೆಸಲಾಗುತ್ತಿದೆ.
Temple Architecture / ದೇವಾಲಯದ ಕಿರುನೋಟ
The temple premises houses a big courtyard. The idol of Kalikamba is sculpted in blackstone and is five feet high.
ದೇವಾಲಯದ ಕಟ್ಟಡ ರಚನೆಯು ಸುಂದರವಾಗಿದ್ದು, ಪ್ರಾಂಗಣವು ವಿಶಾಲವಾಗಿದೆ. 5 ಅಡಿ ಎತ್ತರವಿರುವ ಕಪ್ಪುಶಿಲೆಯ ಕಾಳಿಕಾಂಬ ವಿಗ್ರಹವನ್ನು ಗರ್ಭಗುಡಿಯಲ್ಲಿ ನೋಡಬಹುದಾಗಿದೆ. ದೇವಿಯ ಮುಖವು ಮಂದಹಾಸದಿಂದ ಕೂಡಿದೆ. ದೇವಸ್ಥಾನದ ಆವರಣದಲ್ಲಿ ವಿಶ್ವಕರ್ಮ, ಗಾಯಿತ್ರಿದೇವಿ, ವೀರಬ್ರಹ್ಮೇಂದ್ರಸ್ವಾಮಿ ಹಾಗೂ ಪಂಚಋಷಿಗಳ ಗುಡಿಗಳನ್ನು ಕಾಣಬಹುದು.