In Tretayuga, Kharasura, a demon lived in Dandakaranya as directed by Ravana. He had with him, his wife Kumbhamukhi, sister Shoorpanakha and his followers Dushana and Trishira with other demons. Khara was pious and a great warrior and also a devotee of Lord Shiva. His wife Kumbhamukhi was very loyal to her husband and was worshipping Parvati and Lord Shiva. When one day Kumbhamukhi and Shoorpanakha were roaming leisurely in the forest searching for flowers and honey, they got separated. Atiprabha, the widow of sage Yekamukhi was travelling with her son Bahushruta to kashi. Her son was young, handsome and well educated. Shoorpanakha chanced upon Atiprabha and Bahushruta and was charmed by his grace. She requested him to marry her and when he rejected the proposal, she attacked him and killed him in anger. Atiprabha started grieving her son’s death. Hearing her grief, Kumbhamukhi reached that place. Atiprabha cursed Kumbhamukhi not to beget any offspring thinking it to be her deed. Later she realized her mistake and cursed Shoorpanakha to become the cause of destruction of her dynasty after being attracted and rejected by a handsome person. Then she gave up her life. Kumbhamukhi worried deeply and narrated everything to her husband Kharasura. He sought the help of Sage Shukracharya. Shukracharya asked him to get a Jyestha Linga made by Mayasura and to offer worship for a year and his wife Kumbhamukhi should worship Amriteshwari. Kharasura installed the Linga in Shukapura(Giliyaru) and constructed a beautiful Temple. He also installed Amriteshwari very close to this Shiva Temple. They both continued worship. Khara was blessed by Lord Shiva, that he would attain kaivalya in a battle with Ramachandra, an ‘Avatar’ of Lord Vishnu. Lord Shiva created a beautiful lake to help Kharasura. That lake came to be popularly known as “Varuna Teertha”. When Amriteshwari came to bless Kumbhamukhi, Kumbhamukhi in a confused state requested the Goddess to be young eternally and beget a number of children like Shiva. Amriteshwari replied that due to the curse of the Athiprabha, Kumbhamukhi had no privilege to get children. Still the Goddess gave a providence to her that she would reach Kaivalya and be one with Goddess at the time of spiritual liberation of Khara by Ramachandra. She also said that often Shivalingas would come up in the same place. Kumbhamukhi should assume those Lingas as her children. Therefore Amriteshwari would be called by the name “Mother of many children” (Halavu Makkala Tayi) and would bless the devotees. After sometime Shri Rama came with Sita for his fourteen years forest life. He fought with Khara and Khara met his end and attained Kaivalya. Kumbhamukhi by a long time meditation attained deliverance by uniting with Amriteshwari. From then on, Shivalingas started to form at the divine place of Goddess Amriteshwari. Since then Amriteshwari is called “Halavu Makkala Tayi”. After the death of Khara and Dushana, the sages and ‘rishis’ were performing the holy rituals without fear in this Kshetra. Bahushrutha who met an untimely death by Shoorpanakha had become a “Brahmarakshasa” (demon) due to his blunders in his previous life. He was giving a lot of troubles to sages and saints. Once when a “Yaga” was being performed by the sages, Bramharakshasa came and took away the offerings. They prayed to goddess Amriteshwari to provide relief from the demon. She told the sages that she would come in the incarnation of “Mari” and promised the sages that she would take two forms, one like merciful Amriteshwari and another like cruel Mari. Goddess thus rid the sages of the Brahmarakshasa and since then the Goddess in two forms is granting boons by removing the diseases and providing the welfare. In front of this deity, there is a stone image of “Raktheshwari”. There are also some accompanying gods like ‘Veera Bhadra’, ‘Naga Devata’, Wooden images of Bobbarya, Ummalthi, Chikku, Nandi and Panjurli. Varuna Teertha is to the South of Amriteshwari Temple. In between all these majestic deity of Amriteshwari exists. The temples of “Raja Shekhara” and “Hire Mahalingeshwara” are also close by. ತ್ರೇತಾಯುಗದಲ್ಲಿ ರಾವಣನ ಬಂಧುವಾದ ಖರಾಸುರನು ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಪತ್ನಿಯಾದ ಕುಂಭಮುಖಿಯಿಂದಲೂ ತಂಗಿಯಾದ ಶೂರ್ಪನಖಿಯಿಂದಲೂ ದೂಷಣ ತ್ರಿಶಿರಾದಿ ಅನುಚರರಿಂದಲೂ ಒಡಗೂಡಿ ರಾವಣನ ಅಪ್ಪಣೆಯಂತೆ ದಂಡಕಾರಣ್ಯವನ್ನು ಪಾಲಿಸುತ್ತಿದ್ದನು. ಖರಾಸುರನು ರಾಕ್ಷಸನಾಗಿದ್ದರೂ, ಧರ್ಮಿಷ್ಠನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕಾಲವು ತನ್ನ ಕುಲದೇವನಾದ ಶಂಕರನನ್ನು ಪೂಜಿಸುತ್ತಾ ಇರುತ್ತಿದ್ದನು. ಈತನ ಪತ್ನಿಯಾದ ಕುಂಭಮುಖಿಯೂ ಸಹ ಪತಿವ್ರತಾ ಪಾರಾಯಣಳು, ಪತಿಯ ಜೊತೆಯಲ್ಲಿ ಪಾರ್ವತಿ ಪರಮೇಶ್ವರರ ಸೇವೆಯಲ್ಲಿ ತಲ್ಲೀನಳಾಗಿದ್ದಳು. ಹೀಗಿರಲು ಒಮ್ಮೆ ವಿಹಾರಕ್ಕಾಗಿ ಶೂರ್ಪನಖಿಯನ್ನು ಕೂಡಿಕೊಂಡು ಕುಂಭಮುಖಿಯು ವನದಲ್ಲಿ ಪುಷ್ಪ ಸಂಗ್ರಹ ಹಾಗೂ ಮಧು ಸಂಗ್ರಹ ಮಾಡುತ್ತಾ ಬೇರೆಯಾದರು. ಮಾರ್ಗದಲ್ಲಿ ಏಕಮುಖಿ ಮಹರ್ಷಿಗಳ ಪತ್ನಿಯಾದ ಅತಿಪ್ರಭೆ ಎನ್ನುವವಳು ತನ್ನ ಪತಿಯು ನಿಧನ ಹೊಂದಿದುದರಿಂದ ವೈರಾಗ್ಯದಿಂದ ಕೂಡಿದವಳಾಗಿ, ಪ್ರಾಯ ಪ್ರಬುದ್ದನೂ, ಸುಂದರನೂ, ವಿದ್ಯಾವಂತನೂ ಆದ ತನ್ನ ಮಗ ಬಹುಶ್ರುತ ಎಂಬವನೊಂದಿಗೆ ತೀರ್ಥಯಾತ್ರೆಗಾಗಿ ಕಾಶಿ ಕ್ಷೇತ್ರಕ್ಕೆ ಪ್ರಯಾಣ ಮಾಡುತ್ತಿದ್ದಳು. ಶೂರ್ಪನಖಿಯು ಆ ಋಷಿಕುಮಾರನನ್ನು ನೋಡಿ ಮೋಹಿತಳಾಗಿ ಪರಿಪರಿಯಾಗಿ ಬೇಡಿದರೂ, ಆತನು ಒಪ್ಪದಿರಲು ಶೂರ್ಪನಖಿಯು ಸಂಹರಿಸಿದಳು. ತನ್ನ ಏಕಮಾತ್ರ ಪುತ್ರನ ಮರಣದಿಂದ ಅತಿಪ್ರಭೆಯು ದುಃಖದಿಂದ ರೋಧಿಸುತ್ತಿರುವಾಗ,ಈ ಶಬ್ಧವನ್ನು ಕೇಳಿದ ಕುಂಭಮುಖಿಯು ಅಲ್ಲಿಗೆ ಬಂದಳು. ಶೋಕತಪ್ತಳಾದ ಅತಿಪ್ರಭೆಯು ಈ ಕುಂಭಮುಖಿಯನ್ನೇ ತನ್ನ ಮಗನನ್ನು ಸಂಹರಿಸಿದ ಶೂರ್ಪನಖಿ ಎಂದು ಭಾವಿಸಿ, ನಿನಗೆ ಮಕ್ಕಳು ಹುಟ್ಟದೇ ಹೋಗಲಿ ಎಂದು ಶಪಿಸಿದಳು. ನಂತರ ತನ್ನ ಮಗನ ಮರಣಕ್ಕೆ ಕಾರಣಳಾದವಳು ಕುಂಭಮುಖಿ ಅಲ್ಲವೆಂದು ತಿಳಿದು, ನಿಜಕ್ಕೂ ಮಗನನ್ನು ಸಂಹರಿಸಿದ ಶೂರ್ಪನಖಿಗೆ “ ಎಲೈ ಶೂರ್ಪನಖಿಯೇ! ನೀನು ಪುನಃ ರೂಪವಂತನನ್ನು ಮೋಹಿಸಿ ಅವಮಾನಿತಳಾಗಿ ಹೊಂದಿದವಳಾಗಿ ನಿನ್ನ ವಂಶಕ್ಕೆ ಮೃತ್ಯ ಸ್ವರೂಪಳಾಗು “ ಎಂದು ಶಾಪಕೊಟ್ಟು ಪ್ರಾಣ ಕಳೆದುಕೊಂಡಳು. ಶಾಪದಿಂದ ದುಃಖತಪ್ತಳಾದ ಕುಂಭಮುಖಿಯು ನಡೆದ ವಿಚಾರವನ್ನು ತನ್ನ ಪತಿಯಾದ ಖರನಿಗೆ ತಿಳಿಸಿದಳು. ಖರಾಸುರನು ತನ್ನ ಪತ್ನಿಯಾದ ಕುಂಭಮುಖಿಯನ್ನು ಅನೇಕ ವಿಧವಾಗಿ ಸಂತೈಸಿ, ಈ ಶಾಪನಿವಾರಣೆಗಾಗಿ ತನ್ನ ಕುಲಪುರೋಹಿತರಾದ ಶುಕ್ರಾಚಾರ್ಯರಲ್ಲಿ ಮೊರೆಹೋದನು. ವಿಷಯವನ್ನು ತಿಳಿದ ಶುಕ್ರಾಚಾರ್ಯರು “ಎಲೈ ಖರಾಸುರನೇ, ನೀನು ಮಯಾಸುರನಿಂದ ನಿರ್ಮಿತವಾದ ಜ್ಯೇಷ್ಥ ಲಿಂಗವನ್ನು ತಂದು ಒಂದು ವರ್ಷ ಪರ್ಯಂತ ದೀಕ್ಷಿತನಾಗಿ ಆ ಲಿಂಗವನ್ನು ಪೂಜಿಸಬೇಕು, ನಿನ್ನ ಪತ್ನಿಯಾದ ಕುಂಭಮುಖಿಯು ಕೂಡಾ ನಿಷ್ಠೆಯಿಂದ ಜಗದಂಬಿಕೆಯಾದ ಅಮೃತೇಶ್ವರೀ ದೇವಿಯನ್ನು ಪೂಜಿಸಬೇಕು” ಎಂದು ಸೂಚಿಸಿದರು. ಖರಾಸುರನು ಮಯಾಸುರನಲ್ಲಿಗೆ ಹೋಗಿ ಶುಕ್ರಚಾರ್ಯರು ಹೇಳಿದ ಆ ಜ್ಯೇಷ್ಠ ಲಿಂಗವನ್ನು ತಂದು, ಮನೋಹರವಾದ ಶುಕಪುರ ಎಂಬ ಸ್ಥಳದಲ್ಲಿ (ಗಿಳಿಯಾರು, ಹರ್ತಟ್ಟು) ಪ್ರತಿಷ್ಠಿಸಿದನಲ್ಲದೇ ಸಮೀಪದಲ್ಲಿಯೇ ಜಗನ್ಮಾತೆಯಾದ ಅಮೃತೇಶ್ವರೀ ದೇವಿಯನ್ನು ಪ್ರತಿಷ್ಠಿಸಿ ದಂಪತಿಗಳೀರ್ವರು ಶುಕ್ರಚಾರ್ಯರು ತಿಳಿಸಿದಂತೆ ಉಮಾಮಹೇಶ್ವರರನ್ನು ಪೂಜಿಸುತ್ತಿದ್ದರು. ನಿದ್ರಾಹಾರಗಳನ್ನು ತ್ಯಜಿಸಿ ಅತ್ಯಂತ ಶ್ರದ್ಧೆಯಿಂದ ತಪಸ್ಸನ್ನಾಚರಿಸುತ್ತಿದ್ದ ದಂಪತಿಗಳಿಗೆ ಶಿವನು ಪ್ರತ್ಯಕ್ಷನಾಗಿ ಜ್ಞಾನೋಪದೇಶ ಮಾಡಿದನಲ್ಲದೇ, “ ಕೆಲವು ಕಾಲಗಳ ನಂತರ ಶ್ರೀ ಮಹಾವಿಷ್ಣುವಿನ ಅವತಾರ ರೂಪನಾದ ಶ್ರೀ ರಾಮಚಂದ್ರನು ಈ ದಂಡಕಾರಣ್ಯಕ್ಕೆ ಬಂದಾಗ ಅವನೊಡನೆ ಯುದ್ಧ ಮಾಡಿ ಮುಕ್ತಿ ಹೊಂದುವಿ. ಅಲ್ಲಿಯವರೆಗೆ ಇದೇ ಸ್ಥಳದಲ್ಲಿ ನೀನು ಪ್ರತಿಷ್ಠಿಸಿದ ಜ್ಯೇಷ್ಠಲಿಂಗವನ್ನು ಅರ್ಚಿಸುತ್ತಾ ಇರು. ಅಲ್ಲದೇ ನಿನ್ನ ನಿತ್ಯಕರ್ಮಾನುಷ್ಠಾನಗಳ ಅನುಕೂಲಕ್ಕಾಗಿ ಸರ್ವತೀರ್ಥಸಾನಿಧ್ಯವುಳ್ಳ ಸರೋವರವನ್ನು ನಿರ್ಮಿಸುತ್ತೇನೆಂದು ತಿಳಿಸಿದನಲ್ಲದೇ ಈ ಸರೋವರದಲ್ಲಿ ಗಂಗಾದಿ ಸಕಲ ತೀರ್ಥಗಳು ಸನ್ನಿಹಿತವಾಗಿರುತ್ತವೆ. ಇನ್ನು ಮುಂದೆ ಈ ಸರೋವರವು “ ವರುಣ ತೀರ್ಥವೆಂದು ಪ್ರಸಿದ್ಧವಾಗಲಿ “ ಎಂದು ಅಂತರ್ಧಾನ ಹೊಂದಿದನು. ಇದೇ ರೀತಿ ಕುಂಭಮುಖಿಯ ತಪಸ್ಸಿಗೆ ಮೆಚ್ಚಿದ ಅಮೃತೇಶ್ವರಿಯು ಮನೋಹರವೂ, ಕಾಂತಿಯುಕ್ತವೂ ಆದ ರೂಪಾತಿಶಯದಿಂದ ಆಕೆಗೆ ಪ್ರತ್ಯಕ್ಷಳಾಗಿ “ ಕುಂಭಮುಖಿಯೇ! ಬೇಕಾದ ವರಗಳನ್ನು ಕೇಳು “ ಎನ್ನಲು ದೇವಿಯ ದಿವ್ಯಸ್ವರೂಪ ದರ್ಶನದಿಂದ ಉಂಟಾದ ಸಂತೋಷಾತಿಶಯದಿಂದಲೂ ಋಷಿ ಪತ್ನಿಯ ಶಾಪ ಪ್ರಭಾವದಿಂದಲೂ ಭ್ರಾಂತಳಾಗಿ “ ತಾಯೇ ನೀನು ನಿತ್ಯ ಯೌವನೆಯಾಗಿ ಶಿವನಂತಹ ಪುತ್ರರನ್ನು ಬಹಳ ಕಾಲದವರೆಗೆ ಪಡೆ” ಎಂದು ಬೇಡಿದಳು. ಮಂದಸ್ಮಿತೆಯಾದ ಅಮೃತೇಶ್ವರೀ ದೇವಿಯು “ತಥಾಸ್ತು” ಎಂದಳು. ಅಲ್ಲದೇ, “ ಎಲೈ ಕುಂಭಮುಖಿಯೇ! ಋಷಿ ಶಾಪದಿಂದ ನಿನಗೆ ಮಕ್ಕಳನ್ನು ಪಡೆಯುವ ಭಾಗ್ಯ ಇಲ್ಲ. ಆ ಕಾರಣದಿಂದಲೇ “ ನಾನು ಮಕ್ಕಳನ್ನು ಪಡೆಯುವಂತೆ ಅನುಗ್ರಹಿಸು “ ಎಂದು ಕೇಳುವ ಬದಲು “ ನೀನು ಮಕ್ಕಳನ್ನು ಪಡೆ” ಎಂದು ಕೇಳಿಕೊಂಡಿರುವೆ. ಚಿಂತಿಸಬೇಡ. ಇನ್ನು ಕೆಲವೇ ಸಮಯದ ನಂತರ ಇಲ್ಲಿಗೆ ಆಗಮಿಸುವ ಶ್ರೀ ರಾಮಚಂದ್ರನಿಂದ ನಿನ್ನ ಪತಿಯಾದ ಖರಾಸುರನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಆಗ ನೀನು ಕೂಡಾ ಅನಾಯಾಸವಾಗಿ ಇಲ್ಲಿಯೇ ನೆಲೆಸಿರುವ ನನ್ನಲ್ಲಿ ಐಕ್ಯವನ್ನು ಹೊಂದುವಿ. ಅನಂತರ ಇದೇ ಸ್ಥಳದಲ್ಲಿ ಶಿವಲಿಂಗ ಸದೃಶ ಲಿಂಗಗಳು ಆಗಾಗ ಉತ್ಪತ್ತಿಯಾಗುತ್ತವೆ. ಇವರೇ ನಿನ್ನ ಮಕ್ಕಳೆಂದು ತಿಳಿ. ನಾನು “ ಹಲವು ಮಕ್ಕಳ ತಾಯಿ “ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದವಳಾಗಿ ಭಕ್ತರಿಗೆ ಅನುಗ್ರಹವನ್ನುಂಟು ಮಾಡುತ್ತಾ ಇಲ್ಲಿ ನೆಲೆಸಿರುತ್ತೇನೆ “ ಎಂದು ತಿಳಿಸಿ ಅಂತರ್ಧಾನಳಾದಳು. ಕೆಲವು ಕಾಲಗಳ ನಂತರ ಸೀತಾ ಸಹಿತನಾದ ಶ್ರೀ ರಾಮಚಂದ್ರನು ವನವಾಸಕ್ಕೆ ಬಂದಾಗ ಶೂರ್ಪನಖಿಯ ನಿಮಿತ್ತವಾಗಿ ಖರಾಸುರನಿಗೂ ಶ್ರೀ ರಾಮನಿಗೂ ಯುದ್ಧವಾಯಿತು. ಶಿವನ ವರಪ್ರಸಾದದಿಂದ ಶ್ರೀ ರಾಮನೇ ಮಹಾವಿಷ್ಣುವಿನ ಅವತಾರವೆಂದು ತಿಳಿದು ಖರಾಸುರನು ಯುದ್ಧಮಾಡಿ ಮುಕ್ತಿಯನ್ನು ಹೊಂದಿದನು. ಕುಂಭಮುಖಿಯು ಅಮೃತೇಶ್ವರೀದೇವಿಯನ್ನು ಧ್ಯಾನ ಮಾಡುತ್ತಾ ದೇವಿಯಲ್ಲಿ ಐಕ್ಯ ಹೊಂದಿದಳು. ಅಂದಿನಿಂದ ಶ್ರೀಅಮೃತೇಶ್ವರೀ ದೇವಿಯ ಸನ್ನಿಧಿಯಲ್ಲಿ ಶಿವಲಿಂಗಗಳು ಉದ್ಭವಿಸತೊಡಗಿದವು. ಆದುದರಿಂದ ಶ್ರೀ ಅಮೃತೇಶ್ವರೀ ದೇವಿಯನ್ನು “ ಹಲವು ಮಕ್ಕಳ ತಾಯಿ “ ಎಂದು ಕರೆಯಲಾರಂಭಿಸಿದರು. ಈಗ ಈ ಹೆಸರೇ ಪ್ರಸಿದ್ಧವಾಗಿದೆ. ಶ್ರೀ ರಾಮಚಂದ್ರನು ದಂಡಕಾರಣ್ಯದಲ್ಲಿದ್ದ ಖರ ದೂಷಣಾದಿ ರಾಕ್ಷಸರನ್ನು ಸಂಹರಿಸಿದ ನಂತರ ಋಷಿಮುನಿಗಳು ನಿರ್ಭೀತರಾಗಿ ಅಲ್ಲಲ್ಲಿ ಆಶ್ರಮಗಳನ್ನು ಸ್ಥಾಪಿಸಿಕೊಂಡು ಯಜ್ಞಯಾಗಾದಿ ಕರ್ಮಗಳನ್ನು ಮಾಡಿಕೊಂಡಿದ್ದರು. ಆಗ ಶೂರ್ಪನಖಿಯಿಂದ ಅಕಾಲಮರಣಕ್ಕೆ ತುತ್ತಾದ ಅತಿಪ್ರಭೆಯ ಮಗನಾದ ಬಹುಶ್ರುತನು ಪೂರ್ವಾರ್ಜಿತ ಪಾಪಶೇಷಗಳಿಂದ ಬ್ರಹ್ಮರಾಕ್ಷಸನಾಗಿ ಇದೇ ಸ್ಥಳದಲ್ಲಿದ್ದು ಇಲ್ಲಿನ ಋಷಿಗಳನ್ನು, ಬ್ರಾಹ್ಮಣರನ್ನು ಪೀಡಿಸುತ್ತಾ ಇದ್ದನು. ಒಮ್ಮೆ ಶ್ರೀ ಅಮೃತೇಶ್ವರೀ ಸನ್ನಿಧಿಯಲ್ಲಿ ಋಷಿಗಳು ಯಜ್ಞವನ್ನು ನಡೆಸುತ್ತಿರುವಾಗ ಮಾಯಾರೂಪದಿಂದ ಬಂದು ಯಜ್ಞಶಿಷ್ಟವನ್ನು ಅಪಹರಿಸಿಕೊಂಡು ಹೋದನು. ತಮ್ಮ ಯಾಗಾದಿಗಳು ಈ ರೀತಿ ಹಾಳಾಗಿ ಹೋಗುವುದನ್ನು ನೋಡಿದ ಋಷಿಗಳು ಈ ಬ್ರಹ್ಮರಾಕ್ಷಸನ ಸಂಹಾರಕ್ಕೆ ಶ್ರೀ ದೇವಿಯು ಸಮರ್ಥಳೆಂದು ತಿಳಿದು ಅನೇಕ ವಿಧವಾಗಿ ಶ್ರೀ ಅಮೃತೇಶ್ವರಿಯನ್ನು ಸ್ತೋತ್ರ ಮಾಡಿದರು. ಶ್ರೀ ದೇವಿಯು ಪ್ರತ್ಯಕ್ಷಳಾಗಿ “ ನಿಮಗೆ ಬೇಕಾದ ವರಗಳನ್ನು ಕೇಳಿರಿ “ ಎಂದು ಹೇಳಿದಳು. ಆಗ ಋಷಿಗಳು ’ಹೇ ದೇವಿಯೇ, ನಮ್ಮ ಯಜ್ಞಯಾಗಾದಿಗಳನ್ನು ನಾಶ ಮಾಡುವ ಈ ಬ್ರಹ್ಮರಾಕ್ಷಸನನ್ನು ನೀನು ಸಂಹರಿಸಿ ನಮಗೆ ರಕ್ಷಣೆಯನ್ನುಂಟು ಮಾಡಬೇಕು “ ಎಂದು ಪ್ರಾರ್ಥಿಸಿಕೊಂಡರು. ಆಗ ದೇವಿಯು ಋಷಿಗಳಿಗೆ ಅಭಯವನ್ನು ನೀಡುತ್ತಾ “ ಈ ಬ್ರಹ್ಮರಾಕ್ಷಸನನ್ನು ನಾನು ನಾಶಪಡಿಸಿ ನಿಮ್ಮ ಯಜ್ಞ ಯಾಗದಿಗಳನ್ನು ಸಾಂಗವಾಗಿ ನೆರವೇರುವಂತೆ ಅನುಗ್ರಹಿಸುತ್ತೇನೆ. ನೀವು ಇನ್ನು ಮುಂದೆ ಮಹಾ ಮಾರೀ ಸ್ವರೂಪಳಾದ ನನ್ನನ್ನು ಮದ್ಯ ಮಾಂಸಾದಿಗಳಿಂದ ಅರ್ಚಿಸಿರಿ. ನಾನು ಸಾತ್ವಿಕರೂಪಿಣಿಯಾದ ಅಮೃತೇಶ್ವರೀಯಾಗಿಯೂ, ತಾಮಸರೂಪಿಣಿಯಾದ ಮಾರಿಯಾಗಿಯೂ, ಇಲ್ಲಿ ನೆಲೆಸಿ ಇಲ್ಲಿಯ ಜನರ ಸಕಲ ಸಂಕಷ್ಟಗಳನ್ನು ಪರಿಹರಿಸುತ್ತಾ ಇರುತ್ತೇನೆ“ ಎಂದು ಅಭಯಕೊಟ್ಟು ಅಂತರ್ಧಾನಳಾದಳು. ಶ್ರೀಅಮೃತೇಶ್ವರೀದೇವಿಯು “ ಮಾರಿ ” ಸ್ವರೂಪದಿಂದ ಬ್ರಹ್ಮರಾಕ್ಷಸನನ್ನು ನಾಶ ಮಾಡಿ ಮುಕ್ತಿಯನ್ನು ಕರುಣಿಸಿ ಇದೇ ಸನ್ನಿಧಿಯಲ್ಲಿ ನೆಲೆಸಿ ಭಕ್ತರ ಬಾಧೆಗಳನ್ನು ಪರಿಹರಿಸುತ್ತಾ ಜಗತ್ತಿಗೆ ಮಂಗಲವನ್ನುಂಟುಮಾಡುತ್ತಾ ಒಂದಂಶದಿಂದ “ ಮಾರಿ “ ದೇವತೆಯಾಗಿಯೂ, ಇನ್ನೊಂದಂಶದಿಂದ “ ಅಮೃತೇಶ್ವರೀ” ಯಾಗಿಯೂ ವಿರಾಜಿಸುತ್ತಾಳೆ. ದೇವಿಯ ಮುಂಭಾಗದಲ್ಲಿ ಶ್ರೀ ರಕ್ತೇಶ್ವರೀದೇವಿಯ ಮೂರ್ತಿಯಿದೆ. ಪರಿವಾರ ದೇವತೆಗಳಾದ “ ವೀರಭದ್ರ ಗುಡಿ” ಹಾಗೂ “ ನಾಗ ಶಿಲಾಮೂರ್ತಿ ಮತ್ತು ಕಾಷ್ಠ ಶಿಲ್ಪದ ಮೂರ್ತಿಗಳಾದ ಬೊಬ್ಬರ್ಯ, ಉಮ್ಮಲ್ತಿ, ಚಿಕ್ಕು, ನಂದಿ ಹಾಗೂ ಪಂಜುರ್ಲಿ ದೈವಗಳ ಗುಡಿ ಅತೀ ಸನಿಹದಲ್ಲೇ ಇದೆ. ವರುಣ ತೀರ್ಥವು ದಕ್ಷಿಣದಲ್ಲಿದೆ. ಇದರ ನಡುವೆ ಅಮೃತೇಶ್ವರೀದೇವಿಯು ವಿರಾಜಮಾನಳಾಗಿದ್ದಾಳೆ. “ ರಾಜಶೇಖರ” ಮತ್ತು “ ಹಿರೇ ಮಹಾಲಿಂಗೇಶ್ವರ ದೇವಸ್ಥಾನಗಳು” ಅನತಿ ದೂರದಲ್ಲಿಯೇ ಇವೆ.