ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು ಹೊತ್ತು ಸಾಕಿ, ಸಲಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ-ತಾಯಿ, ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ದೆಯಿಂದ ಕೊಡುವ ಪಿತ್ರುಕಾರ್ಯಕ್ಕೆ "ಶ್ರಾದ್ಧ"ವೆಂದು ಹೆಸರು. ಈ ಮಹಾಲಯಪಕ್ಷದಲ್ಲಿ ಯಾರು ಶ್ರದ್ಧೆಯಿಂದ ಪಿತೃ ಆರಾಧನೆ ಮಾಡುವರೋ, ಅಂತಹವರಿಗೆ, ಸಂತೃಪ್ತರಾದ ಪಿತೃಗಳು ಆಯುಷ್ಯ, ಆರೋಗ್ಯ , ಸಂತಾನ, ಸಂಪತ್ತು, ಜ್ಞಾನ, ಭಕ್ತಿ, ವೈರಾಗ್ಯಗಳು ಸಿಗಲೆಂದು ಆಶೀರ್ವದಿಸುತ್ತಾರೆ.
ಸಂವತ್ಸರ ಪೂರ್ತಿ ಪಿತೃದೇವತೆಗಳು ಸಂತುಷ್ಟರಾಗಿರಬೇಕಾದರೆ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ಒಂದು ದಿನವಾದರೂ ಶ್ರಾದ್ಧವನ್ನು ಮಾಡಬೇಕು.
ಯೋ ವೈ ಶ್ರಾದ್ಧಂ ನರಃ ಕುರ್ಯಾತ್ ಏಕಸ್ಮಿನ್ನಪಿ ವಾಸರೇ |
ತಸ್ಯ ಸಂವತ್ಸರಂ ಯಾವತ್ ಸಂತೃಪ್ತಾಃ ಪಿತರೋ ಧ್ರುವಮ್ ||
ಭಾದ್ರಪದ ಮಾಸದ ಕೃಷ್ಣಪ್ರತಿಪತ್ ನಿಂದ ಆಶ್ವಯುಜ ಮಾಸದ ಪಾಡ್ಯದ ತನಕ ಹದಿನಾರು ದಿನಗಳು ಮಹಾಲಯ ತಿಥಿಗಳು ಎಂದು ಕರೆಸಿಕೊಂಡಿವೆ. ಈ ಪಕ್ಷದಲ್ಲಿ ಪಿತೃಗಳು ಪಿಂಡವನ್ನು ಬಯಸುತ್ತಾರೆ.
ಆದ್ದರಿಂದ ಶ್ರೀಮಠದಲ್ಲಿ ಶ್ರೀಪಾದಂಗಳವರ ಅಪ್ಪಣೆಯ ಮೇರೆಗೆ ಮಹಾಲಯಪಕ್ಷದ ವ್ಯವಸ್ಥೆಯನ್ನು ಮಾಡಲಾಗಿದೆ.
ಪಕ್ಷಮಾಸದಲ್ಲಿ ಬರುವ ವಿಶೇಷ ದಿನಗಳು
02-09-2020 ಬುಧವಾರ ಪ್ರತಿಪದ (ಪಾಡ್ಯ)
03-09-2020 ಗುರುವಾರ ದ್ವಿತೀಯ
04-09-2020 ಶುಕ್ರವಾರ ತೃತೀಯ
05-09-2020 ಶನಿವಾರ ಶ್ರಾದ್ಧಾಭಾವ
06-09-2020 ಭಾನುವಾರ ಚತುರ್ಥಿ
07-09-2020 ಸೋಮವಾರ ಪಂಚಮಿ ಮಹಾಭರಣಿ
08-09-2020 ಮಂಗಳವಾರ ಷಷ್ಠೀ
09-09-2020 ಬುಧವಾರ ಸಪ್ತಮೀ
10-09-2020 ಗುರುವಾರ ಅಷ್ಟಮೀ - ಮಧ್ಯಾಷ್ಟಮೀ
11-09-2020 ಶುಕ್ರವಾರ ನವಮೀ - ಅವಿಧವಾನವಮೀ
12-09-2020 ಶನಿವಾರ ದಶಮೀ - ವ್ಯತೀಪಾತ ಶ್ರಾದ್ಧ
13-09-2020 ಭಾನುವಾರ ಸರ್ವೇಷಾಮೇಕಾದಶೀ
14-09-2020 ಸೋಮವಾರ ಯತಿದ್ವಾದಶೀ - ಏಕಾದಶೀ+ದ್ವಾದಶೀ
15-09-2020 ಮಂಗಳವಾರ ತ್ರಯೋದಶಿ
16-09-2020 ಬುಧವಾರ ಘಾತಚತುರ್ದಶೀ
17-09-2020 ಗುರುವಾರ ಸರ್ವಪಿತೃ ಅಮಾವಾಸ್ಯಾ
ಸೇವಾಕರ್ತರು ತಮ್ಮ ಜೊತೆಗೆ ತರಬೇಕಾದ ಸಾಮಗ್ರಿಗಳು:
ವಿಷ್ಣುಪಾದ, ತಾಮ್ರದ ತಟ್ಟೆ, ಅರ್ಘ್ಯಪಾತ್ರೆ (ಹಿತ್ತಾಳೆ), ಉದ್ಧರಣೆ (ತೀರ್ಥದ ಸೌಟು), ತಂಬಿಗೆ, 2 ಜೋಡಿ ಯಜ್ಞೋಪವಿತ, ಸ್ನಾನಕ್ಕೆ 2 ಪಂಚೆ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ಚಿಲ್ಲರೆ, ಸಮಸ್ತ ಪಿತೃಗಳ ಹೆಸರುಗಳ ಪಟ್ಟಿ.