ಮಹಾಲಕ್ಷ್ಮಿಪುರಂ ವಿವೇಕಾನಂದ ಮೈದಾನದಲ್ಲಿ ನಡೆದ ಅಭಯಾಕ್ಷರ- ಹಾಲುಹಬ್ಬದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಗೋಸಂರಕ್ಷಣೆ ಸಲುವಾಗಿ ಇಡೀ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಇಂಥ ಜಾತ್ರೆ ನಡೆಯುತ್ತಿದೆ. ತಮಿಳುನಾಡಿನ ಈರೋಡು ಜಿಲ್ಲೆಯ ಅಂದಿಯೂರಿನಲ್ಲಿ ಪ್ರತಿವರ್ಷ ನಡೆಯುವ ಆಡಿ ಜಾತ್ರೆಯಲ್ಲಿ ಸಾವಿರಾರು ಗೋವುಗಳು ಕಟುಕರಿಗೆ ಮಾರಾಟವಾಗುತ್ತಿದ್ದವು. ಇದನ್ನು ತಪ್ಪಿಸುವುದೇ ಅಭಯಜಾತ್ರೆಯ ಉದ್ದೇಶ ಎಂದು ಹೇಳಿದರು.
ಗೋಆಂದೋಲನವನ್ನು ತಾತ್ವಿಕ ಅಂತ್ಯ ತಲುಪಿಸುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ. ಅಗತ್ಯಬಿದ್ದರೆ ಗೋವಿಗಾಗಿ ತಲೆ ಕೊಡಲೂ ಸಿದ್ಧ. ಸಾವಿರಾರು ಜಾನುವಾರುಗಳು ಇಂಥ ಪುಣ್ಯಸ್ಥಳದಲ್ಲಿ ಕಟುಕರ ಪಾಲಾಗುತ್ತಿದ್ದರೂ ಅದನ್ನು ತಡೆಯುವ ಪ್ರಾಮಾಣಿಕ ಪ್ರಯತ್ನ ಇದುವರೆಗೆ ನಡೆದಿಲ್ಲ. ಆದರೆ ಈ ಬಾರಿ ಇದನ್ನು ತಡೆಯಲು ಪರ್ಯಾಯವಾಗಿ ಶ್ರೀಮಠ ಅಭಯ ಜಾತ್ರೆ ಹಮ್ಮಿಕೊಂಡಿದೆ ಎಂದು ವಿವರಿಸಿದರು.