ಅಭ್ಯಾಗತರಾಗಿ ಆಗಮಿಸಿದ್ದ ಶ್ರೀಕ್ಷೇತ್ರ ಸಿಗಂಧೂರಿನ ಪ್ರಧಾನ ಅರ್ಚಕರಾದ ಶ್ರೀ ಶೇಷಗಿರಿಭಟ್ ದಂಪತಿಗಳು, ಉತ್ತರಕನ್ನಡ ಜಿಲ್ಲಾಪಂಚಾಯತಿ ಸದಸ್ಯರಾದ ಶ್ರೀಕಲಾ ಶಾಸ್ತ್ರಿ ದಂಪತಿಗಳು ಹಾಗೂ ಶ್ರೀಪರಿವಾರದ ಹಿರಿಯ ಸದಸ್ಯರಾದ ಶ್ರೀ ಕೆ ವಿ ರಮೇಶ್ ಅವರು ’ಅಭಯಾಕ್ಷರ’ ಹಸ್ತಾಕ್ಷರವನ್ನು ಮಾಡಿ ಶ್ರೀಗಳಿಗೆ ಸಮರ್ಪಿಸಿದರು.
ಶ್ರೀಕರಾರ್ಚಿತ ಪೂಜೆ, ಕುಂಕುಮಾರ್ಚನೆ, ಶಿವಪಂಚಾಕ್ಷರಿ ಸ್ತೋತ್ರಪಠಣ,ಅಭಯಂಕರ ಮಂತ್ರ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ನಡೆದವು, ಕೃಷ್ಣ ಯಜುರ್ವೇದ ಪಾರಾಯಣ ಇಂದಿನಿಂದ ಆರಂಭವಾಗಿದ್ದು, ವಾರಗಳ ಕಾಲ ಪಾರಾಯಣ ನಡೆಯಲಿದೆ.