ಬೆಂಗಳೂರು: ದೇಶ, ಸಂಸ್ಕøತಿ ಮತ್ತು ಮನುಕುಲದ ಉಳಿವಿಗಾಗಿ ಗೋಸಂತತಿ ಉಳಿವು ಅನಿವಾರ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು.
ನಗರದ ಜೆ.ಪಿ.ನಗರದಲ್ಲಿ ನಡೆದ ಅಭಯಾಕ್ಷರ- ಹಾಲುಹಬ್ಬ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ರೈತರು ಹಾಗೂ ಗೋವು ಇಲ್ಲದಿದ್ದರೆ, ದೇಶಕ್ಕೆ ಅನ್ನ- ಹಾಲು ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಗೋಸಂರಕ್ಷಣೆಗೆ ಒತ್ತು ನೀಡಬೇಕು. ಗೋವಿನ ಉಳಿವಿಗಾಗಿ ಪ್ರತಿಯೊಬ್ಬರೂ ಗೋದೀಕ್ಷೆ, ಅಕ್ಷರದೀಕ್ಷೆ ಪಡೆದು ಕೈಜೋಡಿಸಬೇಕು ಎಂದು ಆಶಿಸಿದರು.