Sri Ramachandrapura Matha - Shivamogga - ಹಾಲುಹಬ್ಬ – ಟಿ ದಾಸರಹಳ್ಳಿ - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Top

Enquire Now

Pureprayer

ನಮ್ಮೆಲ್ಲರ ಬದುಕಿನ ಹಿಂದೆ ಮೌನದಲ್ಲಿ ಮಾತಾಡುವ ಗೋಮಾತೆ ಇದ್ದಾಳೆ. ಸಕಲ ಶುಭಗಳ ಸಾಗರ ಗೋಮಾತೆಯಾಗಿದ್ದಾಳೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಟಿ.ದಾಸರಹಳ್ಳಿಯ ವಾಸ್ಕ್ ಯೋಗಕೇಂದ್ರದಲ್ಲಿ ನೆಡೆದ ಅಭಯಾಕ್ಷರ ಹಾಲುಹಬ್ಬ ಕಾರ್ಯಕ್ರಮವನ್ನುದ್ದೇಶಿಸಿ ಗೋಸಂದೇಶ ನೀಡಿದ ರಾಘವೇಶ್ವರ ಶ್ರೀಗಳು, ಗೋವಿನ ಪರ ಹಲವರು, ಗೋವಿನ ವಿರುದ್ಧ ಇರುವವರು ಕೆಲವರು ಮಾತ್ರ. ಆದರೆ ಸರ್ಕಾರ ಈ ಕೆಲವರ ಪರವಾಗಿ ನಿಂತಿದೆ. ಕಾರಣ, ಗೋವಿನ ವಿರುದ್ಧ ಇರುವ ಕೆಲವರು ಸಂಘಟಿತರಾಗಿದ್ದಾರೆ. ಗೋವಿನ ಸುತ್ತ ವಿಷವ್ಯೂಹವನ್ನು ರಚಿಸಿದ್ದಾರೆ. ಆದರೆ ನಾವು ಹಲವರಿದ್ದೂ ಸಂಘಟಿತರಾಗಿಲ್ಲ. ಈ ಸಂಘಟನೆಗಾಗಿ ಹಾಲುಹಬ್ಬ. ದೇಹದಲ್ಲಿ ರೋಗಾಣುಗಳಿದ್ದರೆ ಅದರ ವಿರುದ್ಧ ಹೋರಾಡಲಿಕ್ಕಾಗಿ ಪ್ರತಿರೋಧಕ ಜೀವಾಣುಗಳು ಬೇಕಾಗುತ್ತದೆ. ಹಾಗಾಗಿ ಗೋಹತ್ಯೆ ಮಾಡುವ ರೋಗಾಣುಗಳಿಂತಿರುವ ಹಂತಕರಿಗೆ ನಾವು ಗೋಭಕ್ತರಾಗಿ ಪ್ರತಿರೋಧಕ ಜೀವಾಣುಗಳಂತೆ ಉತ್ತರ ನೀಡಬೇಕಿದೆ. ಗೋವು ಕೇವಲ ಪ್ರಾಣಿಯಲ್ಲ. ದೇಶದ ಪ್ರಾಣವೇ ಆಗಿದ್ದು, ಈ ಗೋಸಂರಲ್ಷಣೆಗಾಗಿ ನಾವೆಲ್ಲಾ ಮಾತಾಡಲೇಬೇಕಿದೆ.