Datta Jayanthi | ದತ್ತ ಜಯಂತಿ
ಶ್ರೀಮನ್ಮಹಾವಿಷ್ಣುವು ಲೋಕೋದ್ಧಾರಕ್ಕಾಗಿ ತಳೆದ ನಾನಾ ರೂಪಗಳಲ್ಲೇ ವಿಶಿಷ್ಟವಾದ ರೂಪ #ಅತ್ರಿ-#ಅನಸೂಯಾಸುತ #ಶ್ರೀ #ದತ್ತಾತ್ರೇಯ ರೂಪ. ಅವಧೂತ ದಿಗಂಬರ ಎಂಬೆಲ್ಲ ನಾಮಗಳಿಂದ ಶುದ್ಧಬ್ರಹ್ಮ ಚಿಂತಕ ಸಾಧಕ ಭಕ್ತರ ಆರಾಧ್ಯ ದೈವವಾಗಿ, ನಂಬಿದವರ ಒಳಹೊರಗಲ್ಲಿ ಸದಾ ಜ್ಞಾನಚಕ್ಷುವಾಗಿ, ರಕ್ಷಕನಾಗಿ ಸ್ಥಿತನಾದ ದೇವದೇವನೇ ಶ್ರೀ ಗುರುದೇವದತ್ತ. ‘ದತ್ತ’ ಎಂದರೆ ಕೊಡಲ್ಪಟ್ಟ ಎಂದರ್ಥ. ಯಾರಿಗೆ ಹುಟ್ಟುವಾಗಲೇ ಬೇಕಾದದ್ದು ನೀಡಲ್ಪಟ್ಟಿದೆಯೋ ಆತನು ದತ್ತ. ಅಂದರೆ ‘ನಾನು ಮುಕ್ತನು, ನಾನು ಆತ್ಮನು,