ಕೆಂಪೇಗೌಡನಗರದ ಉದಯಭಾನು ಆಟದ ಮೈದಾನದಲ್ಲಿ ಭಾನುವಾರ ನಡೆದ 10ನೇ ಅಭಯಾಕ್ಷರ- ಹಾಲುಹಬ್ಬ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಇಡೀ ಸಮಾಜ ಗೋಮಾತೆಯ ರಕ್ಷಣೆಗೆ ಕಂಕಣಬದ್ಧರಾಗಬೇಕಿದೆ. ಗೋಮಾತೆಗಾಗಿ ಗೋದೀಕ್ಷೆ, ಅಕ್ಷರದೀಕ್ಷೆ ಸ್ವೀಕರಿಸಿ ಒಗ್ಗಟ್ಟಾಗಿ ಸಂಗ್ರಾಮಕ್ಕೆ ಸಜ್ಜಾಗೋಣ ಎಂದು ಕೋರಿದರು.
ಕೆಂಪುಕೋಟೆಯಲ್ಲಿ ಕಾಮಧೇನು ಧ್ವಜ ಹಾರಿಸುವ, ರಾಷ್ಟ್ರದ ನೆಲಕ್ಕೆ ಒಂದು ಬಿಂದು ಕೂಡಾ ಗೋವಿನ ರಕ್ತ ಬೀಳದಂಥ ದಿನ ಬರಲಿ ಎಂದು ಆಶಿಸಿದರು. ದೇಶದಲ್ಲಿ ಹಾಲಿನ ಹೆಸರಿನಲ್ಲಿ ಹಾಲಾಹಲ ಸೇವಿಸುತ್ತಿದ್ದೇವೆ. ಹಾಲನ್ನು ಮರೆತ ಸಮಾಜಕ್ಕೆ ಹಾಲಿನ ರುಚಿ ತೋರಿಸುವುದೇ ಹಾಲು ಹಬ್ಬದ ಉದ್ದೇಶ ಎಂದು ನುಡಿದರು.ದೇಶ
ಗೋವಾ ಮೂಲದ ಶ್ವೇತಕಪಿಲಾ ಎಂಬ ಅಪರೂಪದ ಗೋತಳಿ ವಿನಾಶದ ಅಂಚಿನಲ್ಲಿದೆ. ಇಂಥ ವಿನಾಶದೊಂದಿಗೆ ರಾಜ್ಯದ ವಿನಾಶವೂ ಆರಂಭವಾಗಲಿದೆ ಎಂದು ಎಚ್ಚರಿಸಿದರು. ದೇಶದಲ್ಲಿ ಹತ್ತು ಕೋಟಿ ಕೃತ್ರಿಮ ಗೋವನ್ನು ಉತ್ಪಾದಿಸಿ, ಗೋಸಂತತಿಯನ್ನೇ ಕುಲಗೆಡಿಸುವ ಹುನ್ನಾರ ನಡೆದಿದೆ ಎಂದು ವಿಶ್ಲೇಷಿಸಿದರು.