ಜಯನಗರದಲ್ಲಿ ಆಯೋಜಿಸಿದ್ದ ಅಭಯಾಕ್ಷರ- ಹಾಲುಹಬ್ಬ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಇಂಥ ತಳಿಸಂಕರದಿಂದ ಭಾರತದ ಅಪೂರ್ವ ತಳಿಗಳು ನಾಶವಾಗುವ ಭೀತಿ ಇದೆ. ಕಳೆದುಹೋದ ತಳಿಗಳನ್ನು ಮರಳಿ ಉತ್ಪಾದಿಸಲಾಗದು. ರಾಜ್ಯದ ಜನತೆಯ ಆತಂಕವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಪ್ರಯತ್ನವೇ ಅಭಯಾಕ್ಷರ ಆಂದೋಲನ ಎಂದು ವಿವರಿಸಿದರು.
ಕಟುಕರ ಪಾಲಾಗುವ ಗೋವುಗಳನ್ನು ರಕ್ಷಿಸುವ ಸಲುವಾಗಿ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ, ಅವುಗಳನ್ನು ಖರೀದಿಸಿ ಪೋಷಿಸುವ ವಿಶಿಷ್ಟ ಗೋಸಂಜೀವಿನಿ ಎಂಬ ಯೋಜನೆಯನ್ನು ಶ್ರೀಮಠ ಹಮ್ಮಿಕೊಂಡಿದೆ. ಇಂಥ ಗೋವುಗಳನ್ನು ರಕ್ಷಿಸುವ ಸಲುವಾಗಿ ಪರ್ಯಾಯ ಜಾನುವಾರು ಜಾತ್ರೆಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುವುದಾಗಿ ಘೋಷಿಸಿದರು. ಇದಕ್ಕೆ ಸಮಾಜ ಧನಾತ್ಮಕವಾಗಿ ಸ್ಪಂದಿಸುವ ಮೂಲಕ ಗೋಮಾತೆಗೆ ಎದುರಾಗಿರುವ ಆತಂಕ ದೂರಮಾಡಬೇಕು ಎಂದು ಸೂಚಿಸಿದರು.