ಅಭಯಚಾತುರ್ಮಾಸ್ಯದ ನಾಲ್ಕನೇ ದಿನ, ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ವರ್ಧಂತ್ಯೋತ್ಸವವನ್ನು ಅರುಣಹವನ ಹಾಗೂ ತೃಚಕಲ್ಪ ಅರುಣ ನಮಸ್ಕಾರದ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಪೀಠಾರೂಢರಾದ ಶ್ರೀಗಳಿಗೆ ಎಲ್ಲಾ ಶಿಷ್ಯಭಕ್ತರು 46 ಅರುಣಮಂತ್ರಗಳಿಂದ 46 ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದ್ದು ವಿಶೇಷವಾಗಿತ್ತು. ಹೊರನಾಡಿನ ಧರ್ಮದರ್ಶಿಗಳಾದ ಶ್ರೀ ಭೀಮೇಶ್ವರ ಜೋಷಿ ದಂಪತಿಗಳು ಗುರುಭಿಕ್ಷಾ ಸೇವೆಯನ್ನು ನೆರವೇರಿಸಿ, ಫಲಸಮರ್ಪಣೆ ಮಾಡಿದರು.