Aadi Krittike (Kavadi) Mahotsav / ಆಡಿ ಕೃತ್ತಿಕೆ (ಕಾವಡಿ) ಜಾತ್ರಾಮಹೋತ್ಸವ
ಮಾನ್ಯ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಇವರ ಆದೇಶ ಸಂಖ್ಯೆ (ಡಿವಿಎಸ್ (ಬಿ) ಸಿ ಆರ್.173/ 2020-21 ದಿ.26-07-2021) ಅನ್ವಯ ದಿ.01-08-2021 ರಿಂದ, ದಿ.03-08-2021ರವರೆಗೆ ಬೆಂಗಳೂರಿನ ಹನುಮಂತನಗರದ ಶ್ರೀ ಕುಮಾರಸ್ವಾಮಿ ಸಮೂಹ ದೇವಾಲಯದಲ್ಲಿ ನಡೆಯಲಿರುವ ಆಡಿ ಕೃತ್ತಿಕೆ ಜಾತ್ರಾಮಹೋತ್ಸವದ ಅಂಗವಾಗಿ ಭಗವದ್ಭಕ್ತರು ಕೈಗೊಳ್ಳುವ ಕಾವಡಿಸೇವೆಯನ್ನು ಕೋವಿಡ್-19 ಹರಡುವಿಕೆಯ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಿ, ದೇವರ ದರ್ಶನಕ್ಕೆ ಮಾತ್ರ ಅನುವು ಮಾಡಿಕೊಟ್ಟು ಆಡಿ ಕೃತ್ತಿಕೆ ನಡೆಸಲು ಆದೇಶಿರುತ್ತಾರೆ. ಭಕ್ತಾದಿಗಳು ಕಾವಡಿಯನ್ನು ತರದೆ ಸಹಕರಿಸಿ ಕೇವಲ ದೇವರ ದರ್ಶನವನ್ನು ಪಡೆದು ಪುನೀತರಾಗಬೇಕೆಂದು ಕೋರುತ್ತೇವೆ.
ಕಾರ್ಯನಿರ್ವಾಹಕ ಅಧಿಕಾರಿಗಳು,
ಶ್ರೀ ಕುಮಾರಸ್ವಾಮಿ ಸಮೂಹ ದೇವಾಲಯಗಳು,
ಹನುಮಂತನಗರ, ಬೆಂಗಳೂರು