ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು ಹೊತ್ತು ಸಾಕಿ, ಸಲಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ-ತಾಯಿ, ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ದೆಯಿಂದ ಕೊಡುವ ಪಿತ್ರುಕಾರ್ಯಕ್ಕೆ "ಶ್ರಾದ್ಧ"ವೆಂದು ಹೆಸರು. ಈ ಮಹಾಲಯಪಕ್ಷದಲ್ಲಿ ಯಾರು ಶ್ರದ್ಧೆಯಿಂದ ಪಿತೃ ಆರಾಧನೆ ಮಾಡುವರೋ, ಅಂತಹವರಿಗೆ, ಸಂತೃಪ್ತರಾದ ಪಿತೃಗಳು ಆಯುಷ್ಯ, ಆರೋಗ್ಯ , ಸಂತಾನ, ಸಂಪತ್ತು, ಜ್ಞಾನ, ಭಕ್ತಿ, ವೈರಾಗ್ಯಗಳು ಸಿಗಲೆಂದು ಆಶೀರ್ವದಿಸುತ್ತಾರೆ.
ಸಂವತ್ಸರ ಪೂರ್ತಿ ಪಿತೃದೇವತೆಗಳು ಸಂತುಷ್ಟರಾಗಿರಬೇಕಾದರೆ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ಒಂದು ದಿನವಾದರೂ ಶ್ರಾದ್ಧವನ್ನು ಮಾಡಬೇಕು.
ಯೋ ವೈ ಶ್ರಾದ್ಧಂ ನರಃ ಕುರ್ಯಾತ್ ಏಕಸ್ಮಿನ್ನಪಿ ವಾಸರೇ |
ತಸ್ಯ ಸಂವತ್ಸರಂ ಯಾವತ್ ಸಂತೃಪ್ತಾಃ ಪಿತರೋ ಧ್ರುವಮ್ ||
ಭಾದ್ರಪದ ಮಾಸದ ಕೃಷ್ಣಪ್ರತಿಪತ್ ನಿಂದ ಆಶ್ವಯುಜ ಮಾಸದ ಪಾಡ್ಯದ ತನಕ ಹದಿನಾರು ದಿನಗಳು ಮಹಾಲಯ ತಿಥಿಗಳು ಎಂದು ಕರೆಸಿಕೊಂಡಿವೆ. ಈ ಪಕ್ಷದಲ್ಲಿ ಪಿತೃಗಳು ಪಿಂಡವನ್ನು ಬಯಸುತ್ತಾರೆ.
ಆದ್ದರಿಂದ ಶ್ರೀಮಠದಲ್ಲಿ ಶ್ರೀಪಾದಂಗಳವರ ಅಪ್ಪಣೆಯ ಮೇರೆಗೆ ಮಹಾಲಯಪಕ್ಷದ ವ್ಯವಸ್ಥೆಯನ್ನು ಮಾಡಲಾಗಿದೆ.
ಪಕ್ಷಮಾಸದಲ್ಲಿ ಬರುವ ವಿಶೇಷ ದಿನಗಳು
21-09-2021 ಮಂಗಳವಾರ ಪ್ರತಿಪದ (ಪಾಡ್ಯ)
22-09-2021 ಬುಧವಾರ ದ್ವಿತೀಯ
23-09-2021 ಗುರುವಾರ ತೃತೀಯ
24-09-2021 ಶುಕ್ರವಾರ ಚತುರ್ಥಿ ಮಹಾಭರಣಿ
25-09-2021 ಶನಿವಾರ ಪಂಚಮಿ
26-09-2021 ಭಾನುವಾರ ಷಷ್ಠೀ
27-09-2021 ಸೋಮವಾರ ಶ್ರಾದ್ಧಾಭಾವ
28-09-2021 ಮಂಗಳವಾರ ಸಪ್ತಮೀ
29-09-2021 ಬುಧವಾರ ಅಷ್ಟಮೀ - ಮಧ್ಯಾಷ್ಟಮೀ
30-09-2021 ಗುರುವಾರ ನವಮೀ - ಅವಿಧವಾನವಮೀ
01-10-2021 ಶುಕ್ರವಾರ ದಶಮೀ
02-10-2021 ಶನಿವಾರ ಶ್ರಾದ್ಧಾಭಾವ ಸರ್ವೇಷಾಮೇಕಾದಶೀ
03-10-2021 ಭಾನುವಾರ ಏಕಾದಶೀ+ದ್ವಾದಶೀ ಯತಿದ್ವಾದಶೀ
04-10-2021 ಸೋಮವಾರ ಮಘಾತ್ರಯೋದಶಿ
05-10-2021 ಮಂಗಳವಾರ ಘಾತಚತುರ್ದಶೀ
06-10-2021 ಬುಧವಾರ ಸರ್ವಪಿತೃ ಅಮಾವಾಸ್ಯಾ
ಸೇವಾಕರ್ತರು ತಮ್ಮ ಜೊತೆಗೆ ತರಬೇಕಾದ ಸಾಮಗ್ರಿಗಳು:
ವಿಷ್ಣುಪಾದ, ತಾಮ್ರದ ತಟ್ಟೆ, ಅರ್ಘ್ಯಪಾತ್ರೆ (ಹಿತ್ತಾಳೆ), ಉದ್ಧರಣೆ (ತೀರ್ಥದ ಸೌಟು), ತಂಬಿಗೆ, 2 ಜೋಡಿ ಯಜ್ಞೋಪವಿತ, ಸ್ನಾನಕ್ಕೆ 2 ಪಂಚೆ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ಚಿಲ್ಲರೆ, ಸಮಸ್ತ ಪಿತೃಗಳ ಹೆಸರುಗಳ ಪಟ್ಟಿ.